Sunday, October 11, 2020
news99onlinekodagu. ಸಂಪತ್ ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು..
News99indiaonlinekodagu ಮಡಿಕೇರಿ. ಸುಳ್ಯದ ಶಾಂತಿ ನಗರದಲ್ಲಿ ಸಂಪತ್ ನನ್ನು ಹತ್ಯಗೆ ಯಲಾದ ಆರೋಪದಡಿಯಲ್ಲಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರದಂದು ಬೆಳ್ಳಂಬೆಳಗ್ಗೆ ಟೊಯೋಟಾ ಕ್ವಾಲಿಸ್ನ ಲ್ಲಿ ಬಂದ ದುಷ್ಕರ್ಮಿಗಳು ಸಂಪತ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಮತ್ತು ನಾಡ ಕೋವಿಯಿಂದ ಕೊಲೆಗೈದಿದ್ದರು. ಬಂದುಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು .. ಮತ್ತು ಅಲ್ಲಿಂದ ತಲೆಮರೆಸಿಕೊಂಡಿದ್ದರು. ಆರೋಪಿಗಳು ಕೊಲೆ ಮಾಡಲು ಉಪಯೋಗಿಸಿದ ಕಾರನ್ನು ಅರಂತೋಡಿನಲ್ಲಿ ಬಿಟ್ಟು ಹೋಗಿದ್ದರು. ಅದನ್ನು ಶುಕ್ರವಾರದಂದು ಪೊಲೀಸರು ಪತ್ತೆ ಹಚ್ಚಿದರು. ತದನಂತರ ಕಾರಿನ ಮಾಲೀಕರನ್ನು, ಕೋವಿಯಾ ಮಾಲೀಕರನ್ನು ಪತ್ತೆಹಚ್ಚಿ ವಿಚಾರಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು . ಕೋವಿಯ ಮತ್ತು ಕಾರಿನ ಮಾಲೀಕರನ್ನು ವಿಚಾರಣೆಯ ನಂತರ ಬಿಡುಗಡೆಗೊಳಿಸಲಾಯಿತು. ಅದರ ಹಾಗೆ ಸುಳಿವು ಸಿಕ್ಕ ನಂತರ ಪೊಲೀಸರು ಆರೋಪಿಗಳನ್ನು ಕಾರವಾರ ದಲ್ಲಿ ಬಂದಿಸಿ ಕರೆತಂದಿದ್ದಾರೆ. ಎಂದು ವದಂತಿ ಹಬ್ಬಿತ್ತು ಆದರೆ.. ಕೊಲೆ ಆರೋಪಿ ಗಳು ಸುಬ್ರಹ್ಮಣ್ಯದಿಂದ ಸ್ವಿಫ್ಟ್ಟ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮನು ಕಲ್ಲುಗುಂಡಿ, ಮಧು ಕಲ್ಲುಗುಂಡಿ, ಬಿಪಿನ್ ಕಲ್ಗುಂಡಿ, ಕಾರ್ತಿಕ್ ಕಲ್ಲುಗುಂಡಿ, ಶಶಿರ್ ಅಡ್ಕಾರ್. ಪೊಲೀಸ್ ಬಂಧನದಲ್ಲಿದ್ದಾರೆ.
Subscribe to:
Post Comments (Atom)
No comments:
Post a Comment