Monday, October 12, 2020

news99onlinekodagu.ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆ.

ಮಡಿಕೇರಿ12/10/20. ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆಯು ಅಧ್ಯಕ್ಷರಾದ   ಮಾದವ  ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಚರ್ಚಿಸಿದರು ಮತ್ತು ಸಂಭಾವ್ಯ ಅಭ್ಯರ್ಥಿಗಳಾದ ಎಂ ಪಿ ವಾಸು ,ರಾಜೇಶ್ವರಿ ಕೆ ಕೆ ,ಸರೋಜ ಸುಂದರ ತಮ್ಮ ಅಭಿಪ್ರಾಯ ತಿಳಿಸಿದರು .ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮೊಇದೀನ್ ಕುಂಜಿ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್ ಪಿ ,ವಲಯ ಅಧ್ಯಕ್ಷರಾದ ಸುರೇಶ ಪಿ ಎಲ್ ,ರವರುಗಳು ಸಲಹೆಗಳನ್ನು ನೀಡಿದರು .ಸಭೆಯಲ್ಲಿ ಮೋನಪ್ಪ.ಉಮೇಶ್  ಪ್ರೀತಿಕಾ ,ಕಾವೇರಿ.ಮೋಹನ್ ಜಾಫರ್.ಶ್ಯಾಮ್. ನಾಸೀರ್.ಹಾರೀಶ್ ಫ್ರಾನ್ಸಿಸ್ ಮಿಥುನ್.ಹರೀಶ್ . ಬಾಲಕೃಷ್ಣ.ಜಯಪ್ರಕಾಶ ಪ್ರಶಾಂತ್.ರೀತಿನ್ ಹಂಸ.  ಹಂಸವಲಿ ಲಿಂಗಪ್ಪ.ಮನೋಹರ  ,ರಿಯಾಜ್ ,ಅನ್ವರ್ ಮೊದಲಾದವರು ಉಪಸ್ಥಿತರಿದ್ದರು .ಸರ್ವರನ್ನು ಸುಕೇಶ್ ಗುಡ್ಡೆಗದೆ ಸ್ವಾಗತಿಸಿದರು.

Sunday, October 11, 2020

news99onlinekodagu. ಸಂಪತ್ ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು..

News99indiaonlinekodagu ಮಡಿಕೇರಿ. ಸುಳ್ಯದ ಶಾಂತಿ ನಗರದಲ್ಲಿ ಸಂಪತ್ ನನ್ನು ಹತ್ಯಗೆ ಯಲಾದ ಆರೋಪದಡಿಯಲ್ಲಿ  ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರದಂದು ಬೆಳ್ಳಂಬೆಳಗ್ಗೆ   ಟೊಯೋಟಾ ಕ್ವಾಲಿಸ್ನ ಲ್ಲಿ ಬಂದ ದುಷ್ಕರ್ಮಿಗಳು ಸಂಪತ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಮತ್ತು ನಾಡ ಕೋವಿಯಿಂದ ಕೊಲೆಗೈದಿದ್ದರು. ಬಂದುಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು .. ಮತ್ತು ಅಲ್ಲಿಂದ ತಲೆಮರೆಸಿಕೊಂಡಿದ್ದರು. ಆರೋಪಿಗಳು ಕೊಲೆ ಮಾಡಲು ಉಪಯೋಗಿಸಿದ ಕಾರನ್ನು ಅರಂತೋಡಿನಲ್ಲಿ  ಬಿಟ್ಟು ಹೋಗಿದ್ದರು. ಅದನ್ನು ಶುಕ್ರವಾರದಂದು ಪೊಲೀಸರು ಪತ್ತೆ ಹಚ್ಚಿದರು. ತದನಂತರ ಕಾರಿನ ಮಾಲೀಕರನ್ನು, ಕೋವಿಯಾ ಮಾಲೀಕರನ್ನು ಪತ್ತೆಹಚ್ಚಿ ವಿಚಾರಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು . ಕೋವಿಯ ಮತ್ತು ಕಾರಿನ ಮಾಲೀಕರನ್ನು   ವಿಚಾರಣೆಯ ನಂತರ ಬಿಡುಗಡೆಗೊಳಿಸಲಾಯಿತು. ಅದರ ಹಾಗೆ ಸುಳಿವು ಸಿಕ್ಕ ನಂತರ ಪೊಲೀಸರು ಆರೋಪಿಗಳನ್ನು ಕಾರವಾರ ದಲ್ಲಿ ಬಂದಿಸಿ ಕರೆತಂದಿದ್ದಾರೆ. ಎಂದು ವದಂತಿ ಹಬ್ಬಿತ್ತು ಆದರೆ.. ಕೊಲೆ ಆರೋಪಿ ಗಳು ಸುಬ್ರಹ್ಮಣ್ಯದಿಂದ ಸ್ವಿಫ್ಟ್ಟ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮನು ಕಲ್ಲುಗುಂಡಿ, ಮಧು ಕಲ್ಲುಗುಂಡಿ, ಬಿಪಿನ್ ಕಲ್ಗುಂಡಿ, ಕಾರ್ತಿಕ್ ಕಲ್ಲುಗುಂಡಿ, ಶಶಿರ್   ಅಡ್ಕಾರ್. ಪೊಲೀಸ್ ಬಂಧನದಲ್ಲಿದ್ದಾರೆ. 

Thursday, October 8, 2020

Chenpatna tea

Chenpatna tea maker shabeer
#tea, #chai, #chenpattana
https://youtu.be/35aXFdciuhIChenpatna tea

Tuesday, October 6, 2020

Thursday, September 17, 2020

99newsonlinelivecoorg, ಮೋದಿ ಜನ್ಮದಿನ

99newsindiaonline livecoorg 17sep,
ಅಂದರೆ ನರೇಂದ್ರ ಮೋದಿ 70ನೇ ಜನ್ಮದಿನ ಇಂದು. 

Wednesday, September 16, 2020

news99onlinekodagu.. ಮಡಿಕೇರಿಯ ಸನಿಹದಲ್ಲಿಯೇ ಇದೆ ಕರಿಕೆ ,ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಸ್ಥಳಗಳು https://youtu.be/m6Uu4t4UIhEkarike

https://youtu.be/m6Uu4t4UIhEkarike
news99onlinekodagu.. ಮಡಿಕೇರಿಯ ಸನಿಹದಲ್ಲಿಯೇ ಇದೆ ಕರಿಕೆ ,ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಸ್ಥಳಗಳು



https://youtu.be/m6Uu4t4UIhEkarike view point
https://youtu.be/m6Uu4t4UIhE

  ಮಡಿಕೇರಿ:    ಕೆಲವೊಂದು ಪ್ರವಾಸಿ ಸ್ಥಳಗಳು ನಮ್ಮ ಸನಿಯದಲ್ಲಿ ಇದ್ದರು ನಾವು ಗಮನಿಸುವುದೇ ಇಲ್ಲ. ಅಂತಹ ವಿಷಯಕ್ಕೆ ಉತ್ತಮ ಉದಾಹರಣೆ ಮಡಿಕೇರಿಯ  ಕೆಲವೇ ದೂರದಲ್ಲಿರುವ ಕರಿಕೆ ಮತ್ತು ರಾಣಿಪುರಂ ಎಂಬೆರಡು ಅದ್ಭುತ ಪ್ರವಾಸಿ ತಾಣಗಳು.
ಸುಳ್ಯದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿ ಕರಿಕೆ ಎಂಬ ಅದ್ಭುತ ಪ್ರವಾಸಿ ತಾಣವಿದೆ. ಕರಿಕೆ ತನ್ನ ಸುಂದರ ಕಾಡುಗಳು, ಬೆಟ್ಟಗುಡ್ಡಗಳು, 28ಕ್ಕೂ ಅಧಿಕ ಜಲಪಾತಗಳಿಗೆ ಹೆಸರುವಾಸಿ.  ಮಡಿಕೇರಿಯ    ಕರಿಕೆಯಲ್ಲಿ ಚಾರಣ ಸ್ಥಳವು ಇದೆ. ಕರಿಕೆಯ ಮೂಲಕ ಭಾಗಮಂಡಲವನ್ನು ತಲಕಾವೇರಿ ವನ್ಯಧಾಮದ ಮೂಲಕ ಹಾದುಹೋಗುವ 25 ಕಿಲೋಮೀಟರ್ ರಸ್ತೆಯಲ್ಲಿ ಚಲಿಸಿದಾಗ ಸಿಗುವ ಅದ್ಭುತ ಅನುಭವ ಪಶ್ಚಿಮಘಟ್ಟದ ಇನ್ನಾವುದೇ ಸ್ಥಳಗಳಲ್ಲಿ ಸಿಗಲಾರದು.
ಇನ್ನು ಕೇರಳದ ಕಾಸರಗೋಡಿನಲ್ಲಿರುವ ರಾಣಿಪುರಂ ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಗಿರಿಧಾಮ. ರಾಣಿಪುರಂ   ಮಡಿಕೇರಿಯ   ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ರಾಣಿಪುರಂ ದೇಶದ ಗಮನ ಸೆಳೆದ ಖ್ಯಾತ ಚಾರಣ ಸ್ಥಳಗಳಲ್ಲಿ ಒಂದು.
ಇಂತಹ ಅದ್ಭುತ 2 ಪ್ರವಾಸಿ ತಾಣಗಳು ಸುಳ್ಯದ ಗಡಿಭಾಗದಲ್ಲಿದೆ.ಮಡಿಕೇರಿಯ
ಮಾರ್ಗವಾಗಿ ಈ ಎರಡು ಸ್ಥಳಗಳನ್ನು ನಾವು ಸುಲಭವಾಗಿ ಮುಟ್ಟಬಹುದು.

Saturday, September 12, 2020

99indianewsonline kodagu ಸಾಮಾಜಿಕ ಕಾರ್ಯಕರ್ತ ಹಿದಾಯತುಲ್ಲಾ ಮಡಿಕೇರಿ(blood bayya)

ಮಡಿಕೇರಿ, 12/sep/2020
ಮಡಿಕೇರಿಯಲ್ಲಿ ಎಲ್ಲರಿಗೂ ಚಿರಪರಿಚಿತರಾದ ಹೆಸರೇ 'ಬ್ಲಡ್ ಬಯ್ಯ ' ಹಿದಾಯತುಲ್ಲಾ ಮಡಿಕೇರಿ ಇವರು ಕೊಡಗಿನಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಿ ಮತ್ತು ಅನಾಥ ಶವ ಸಂಸ್ಕಾರ , ಈ ತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ರುವಂತಹ  ಮತ್ತು ಹಲವಾರು ಜನರಿಗೂ ಸಹಾಯವನ್ನು ಮಾಡಿರುವಂತಹ ವ್ಯಕ್ತಿಯಾಗಿರುತ್ತಾರೆ. ಇವರ ಸಾಮಾಜಿಕ ಕಾರ್ಯವನ್ನು ಗುರುತಿಸಿ  ಅನೇಕ   ಸಂಘ-ಸಂಸ್ಥೆಗಳು  ಇವರನ್ನು  ಪ್ರಶಸ್ತಿಗಳಿಂದ ಸನ್ಮಾನಿಸಿದ್ದಾರೆ. ಇವರಿಗೆ 30 ಕಿಂತ  ಹೆಚ್ಚಾಗಿ ಪ್ರಶಸ್ತಿಗಳು ಲಭಿಸಿವೆ. ಇವರ ಸಾಮಾಜಿಕ ಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ವಾಗಲಿ.
                                                by
                                   (javeed madikeri)

ಸಂಪಾದಕ: ಎಂ  ಎಂ  ಮನ್ಸೂರ್ ಮಡಿಕೇರಿ

Sunday, September 6, 2020

ಅಪ್ರಾಪ್ತಿ ಹುಡುಗಿಯೊಂದಿಗೆ ಲೈಂಗಿಕ ದೌರ್ಜನ್ಯ.! ಇಬ್ಬರ ಬಂಧನ

News 99indiaonlinekodagu 
#News 99indiaonlinekodagu
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಇಬ್ಬರ ಬಂಧನ 

ಸ್ವಯಂಘೋಷಿತ ಧರ್ಮ ರಕ್ಷಕನಿಂದ 16 ರ ಹರೆಯದ ದಲಿತ ಬಾಲಕಿಯ
 ಅತ್ಯಾಚಾರ.
ಸಂಪಾಜೆ ಚೆಡಾವು ಮೂಲದ ಸ್ವಯಂ ಘೋಷಿತ ಹಿಂದೂ ರಕ್ಷಕ  
ಭರತ್ ಚಾಡವು ಹಾಗೂ ರಾಕೇಶ್ ಕಲ್ಲುಗುಂಡಿ ಎಂಬವರಿಂದ ಬಾಲಕಿಯ ಅತ್ಯಾಚಾರ ಸುಳ್ಯ ಪೊಲೀಸರಿಂದ ಅರೆಸ್ಟ್.
ಕಲ್ಲುಗುಂಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ.
ಇಬ್ಬರು ಆರೋಪಿಗಳನ್ನು ಬಂಧಿಸಿದ ಸುಳ್ಯ ಪೋಲಿಸರು..‌!

Friday, August 21, 2020

news 99online, kodagu

ಕೊಡಗು ಜಿಲ್ಲಾ ಯುವ ಕಾಂಗ್ರೇಸ್ ನಿಂದ  ಮಾಜಿ ಪ್ರಧಾನಿ  ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ.

ಮಡಿಕೇರಿ ಆ.20 : ದೇಶದ ಯುವ ಸಮೂಹಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿ ತುಂಬಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆದರ್ಶಗಳು ಇಂದಿಗೂ ಜೀವಂತವೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್.ಪಿ ಹೇಳಿದ್ದಾರೆ.
ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೇರಿಸಿದ ದೂರದೃಷ್ಟಿತ್ವದ ನಾಯಕ ರಾಜೀವ್ ಗಾಂಧಿ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ದೀನ, ದಲಿತರ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಶ್ರಮಿಸಿದ ದೇವರಾಜ ಅರಸು ಅವರ ಸೇವೆ ಸ್ಮರಣೀಯವೆಂದು ಹನೀಫ್ ಬಣ್ಣಿಸಿದರು.

Monday, August 17, 2020

NEWS 99online live coorg

 Covid-19,madikeri kodagu

COVID19 Updates


As of August 17 2020, 09:00 AM


250 Containment Zones in the District. 


Taluk wise Containment Zone details:


#COVID2019India

#StayHomeStaySafe

#KodaguFightsCorona

#KarnatakaFightsCorona

Details by,- kodagu dc. 


Sunday, May 24, 2020

Butter fruit in madikeri

Kodagu madikeri

Greattv ಧ್ವನಿ

Butter fruit in madikeri 
ಮಂಜಿನ ನಗರಿಯ ಬಟರ್ ಫ್ರೂಟ್ ತುಂಬಾ ಮಹತ್ವವನ್ನು ಪಡೆದಿದೆ. 


ಕೊಡಗು ಜಿಲ್ಲೆಯ ಮಡಿಕೇರಿ ಅಲ್ಲಿ  ಕಾಣಸಿಗುವಂತಹ ತುಂಬಾ ರಸವತ್ತಾದ ಹಣ್ಣು ಮಡಿಕೇರಿಯ ಸಂತೆಯಲ್ಲಿಿ ಇದು ಅತಿ ಕಡಿಮೆೆ ಬೆಲೆಯಲ್ಲಿ ಮಾರಾಟವಾಗುತ್ತದೆ. ಏಕೆಂದರೆ ಇಲ್ಲಿ ಪ್ರತಿಯೊಬ್ಬರೂ ಸಹ ಸ್ವಂತ ಮರಗಳನ್ನುು ಇಟ್ಟುಕೊಂಡಿದ್ದಾರೆ. ಈ ಹಣ್ಣಿಗೆ ಇತರ ರಾಜ್ಯಗಳಲ್ಲೂ ಮತ್ತು ಬೇರೆ ದೇಶಗಳಲ್ಲಿ, ಅತ್ಯಂತ ಹೆಚ್ಚು ಬೇಡಿಕೆ ಇದೆ. 

Tuesday, January 14, 2020

Monday, January 13, 2020